ಮುರುಕನಹಳ್ಳಿಯ ಗುರುರಾಜು(40), ಪಾಂಡವಪುರದ ರಂಗೇಗೌಡ (54) ಬಂಧಿತರು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ಬಿ.ವೆಂಕಟೇಶಯ್ಯ ಅವರು ನೇತೃತ್ವದ ತಂಡ ಭಾನುವಾರ ಖಚಿತ ಮಾಹಿತಿ ಮೇರೆಗೆ ತೋಟದ ಮನೆಗೆ ದಾಳಿ ನಡೆಸಿದೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 8 ಕೆ.ಜಿ ಗಾಂಜಾಸೊಪ್ಪು ಪತ್ತೆಯಾಗಿದೆ. ಹೊಸವರ್ಷದ ಸಂಭ್ರಮಾಚರಣೆ ನಡೆಸುವ ಯುವಜನರಿಗೆ ಮಾರಾಟ ಮಾಡಲು ತಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.