ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ನೀರಿನ ಬೇಡಿಕೆ ಹೆಚ್ಚಾದಂತೆ ಕಾಲುವೆ ಕೆಳ ಭಾಗದ ರೈತರಿಗೆ ನೀರು ದೊರಕದೆ ಹೈರಾಣಾಗುತ್ತಾರೆ. ನ್ಯಾಯಬದ್ದ ನೀರಿನ ಹಕ್ಕನ್ನು ಪಡೆದ ರೈತರನ್ನು ಕಾಲುವೆ ನೀರಿನಿಂದ ವಂಚಿತ
ರನ್ನಾಗಿ ಮಾಡುವುದು ಪ್ರತಿವರ್ಷ ಸಾಮಾನ್ಯವಾಗಿದೆ. ನೀರಿಗಾಗಿ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮುನ್ನವೆ ಜಿಲ್ಲಾಧಿಕಾರಿ ಗಮನಹರಿಸಿ ಅನಧಿಕೃತವಾಗಿ ನೀರು ಪಡೆಯುವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕಾಲುವೆ ಜಾಲದ ಕೆಳಭಾಗದ ರೈತರು ಮನವಿ ಮಾಡಿದ್ದಾರೆ.