ದೇಶದಲ್ಲಿ ನೂರಾರು ಅಣೆಕಟ್ಟುಗಳ ಮೂಲಕ ಲಕ್ಷಾಂತರ ಟಿಎಂಸಿ ಅಡಿ ನೀರನ್ನು ತಿರುಗಿಸಿ ಕೃಷಿ, ಕುಡಿಯುವ ನೀರು ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇಲ್ಲದಿದ್ದಲ್ಲಿ ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಹದಾಯಿ ನದಿಯಿಂದ 7.56 ಟಿಎಂಸಿ ಅಡಿ ನೀರು ತಿರುಗಿಸುವುದರಿಂದ ಆಗುವ ಪ್ರಯೋಜನ, ಸಾಧಕ–ಬಾಧಕಗಳೇನು, ಗೋವಾ ರಾಜ್ಯದ ವಿರೋಧ ಸಮಂಜಸವೇ ಎಂಬುದು ಮುನ್ನೆಲೆಗೆ ಬರಬೇಕಾಗಿದೆ.