ಬೆಂಗಳೂರು: ನಗರದ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಇಳಿಕೆಯಾಗಿದೆ.
‘ಈ ಬಾರಿ ಮಳೆಯಾದ್ದರಿಂದ ಉತ್ತಮ ಬೆಳೆ ಬಂದಿದೆ. ದಾಸ್ತಾನು ಸಾಕಷ್ಟಿದೆ. ಫೆಬ್ರುವರಿ ಹಾಗೂ ಮಾರ್ಚ್ವರೆಗೆ ಇದೇ ಧಾರಣೆ ಮುಂದುವರಿಯಲಿದೆ’ ಎಂದು ಕೆ.ಆರ್. ಮಾರುಕಟ್ಟೆಯ ತರಕಾರಿ ವ್ಯಾಪಾರಿ ಇಕ್ಬಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾರೆಟ್ ಬೆಲೆ ₹ 50ರಿಂದ 60ರ ಆಜುಬಾಜಿನಲ್ಲಿ ಇದೆ. ಈರುಳ್ಳಿ ಬೆಲೆ ಕೊಂಚ ಏರಿಕೆ ಕಂಡಿದೆ. ಗಾತ್ರದ ಆಧಾರದ ಮೇಲೆ ಬೆಲೆಯಲ್ಲಿ ಹೆಚ್ಚು ಕಡಿಮೆ ಮಾಡಲಾಗುತ್ತಿದೆ. ಟೊಮೆಟೊ ಧಾರಣೆಯಲ್ಲಿ (ಕೆ.ಜಿ.ಗೆ ₹10) ವ್ಯತ್ಯಾಸ
ವಾಗಿಲ್ಲ. ಆಲೂಗಡ್ಡೆ ₹ 12ರಿಂದ 10ಕ್ಕೆ, ಎಲೆಕೋಸು ಹಾಗೂ ಹೂಕೋಸು ₹ 20, ಹಸಿ ಮೆಣಸಿನಕಾಯಿ ₹40 ಇದೆ. ಮೂಲಂಗಿ ₹ 40ರಿಂದ 10ಕ್ಕೆ ಇಳಿದಿದೆ.
ತರಕಾರಿ ಬೆಲೆ ಕಡಿಮೆ ಇರುವುದರಿಂದ ವ್ಯಾಪಾರ ಹೆಚ್ಚಾಗಿದೆ. ಆದರೆ, ವ್ಯಾಪಾರಿಗಳಿಗೇನೂ ಅಷ್ಟಾಗಿ ಲಾಭ ಸಿಗುತ್ತಿಲ್ಲ ಎಂದು ವಿವರಿಸಿದರು ವ್ಯಾಪಾರಿ ಮೊಹಮ್ಮದ್ ಇಲಿಯಾಸ್.
*
ಉತ್ತಮ ಮಳೆಯಾಗಿದ್ದರಿಂದ ಇಳುವರಿ ಹೆಚ್ಚಾಗಿದೆ. ಸರಬರಾಜು ಜಾಸ್ತಿಯಾಗಿದೆ. ಹೀಗಾಗಿ ತರಕಾರಿ ಬೆಲೆ ಇಳಿಕೆಯಾಗಿದೆ. –ಗೋಪಾಲಗೌಡ, ಹಾಪ್ಕಾಮ್ಸ್ ಮಾರುಕಟ್ಟೆ ವ್ಯವಸ್ಥಾಪಕ