ಸಭೆಯಲ್ಲಿ ಜಾತ್ರೆಯ ನಡಾವಳಿಗಳನ್ನು ಚರ್ಚಿಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಈಗಾಗಲೇ ಮಹಾರಥದ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಫೆ.20ರ ವೇಳಗೆ ರಥವು ಸಿದ್ಧವಾಗಲಿದೆ. ₹ 18.25 ಲಕ್ಷ ವೆಚ್ಚದಲ್ಲಿ ರಥದ ಐದು ಅಂತಸ್ತುಗಳ ಮರಮುಟ್ಟುಗಳನ್ನು ಬದಲಾಯಿಸಲಾಗಿದೆ’ ಎಂದು ಮಾಹಿತಿ ನೀಡಿದರು. ಇದೇ ವೇಳೆ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ಕೆ.ನಾಗಪ್ಪ, ಗೋವಿಂದರಾಜು, ಮುನಿಯಪ್ಪ, ಸಿಬ್ಬಂದಿ ಎಸ್.ಸತೀಶ್ ಉಪಸ್ಥಿತರಿದ್ದರು.