ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಉಳಿದಿರುವುದು ಜಾತ್ಯಾತೀತ ಜನರಿಂದ: ಸೀತಾರಾಂ ಯೆಚೂರಿ

Last Updated 2 ಜನವರಿ 2018, 9:14 IST
ಅಕ್ಷರ ಗಾತ್ರ

ಮೂಡುಬಿದಿರೆ: 'ಧರ್ಮ, ಜಾತಿ, ಕುಲದ ಗುರುತನ್ನು ಮೀರಿ‌ ಮೊದಲು‌ ನಾನು ಭಾರತೀಯ ಎಂಬುವವರೇ ಜಾತ್ಯಾತೀತರು. ಅವರಿಂದಾಗಿಯೇ ದೇಶ ಉಳಿದಿದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

ಸಿಪಿಎಂ ‌22ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

’ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಕೈಗೊಂಡ ‌ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆ ಈಗ ಸಂವಿಧಾನದ ಬದಲಾವಣೆ ಮಾತನಾಡುತ್ತಿದ್ದಾರೆ. ಜಾತ್ಯಾತೀತರಿಗೆ ಅಪ್ಪ, ಅಮ್ಮನ ಗುರುತಿಲ್ಲ ಎಂಬ ಕೀಳು ಹೇಳಿಕೆ ನೀಡಿದ್ದಾರೆ. ಜಾತ್ಯಾತೀತ ಜನರಿಂದಲೇ‌ ದೇಶ ಉಳಿದಿದೆ ಎಂಬುದನ್ನು ಅವರು ಮೊದಲು ಅರಿಯಬೇಕು' ಎಂದರು.

ದೇಶ ಹಿಂದೆಂದೂ ಕಾಣದಂತಹ ಕೋಮುವಾದಿ ಧ್ರುವೀಕರಣದ ಅಪಾಯ ಎದುರಿಸುತ್ತಿದೆ. ಅದರಿಂದ ಜನರ ‌ದೈನಂದಿನ‌ ಸಮಸ್ಯೆಗಳು ‌ಬದಿಗೆ ಸರಿಯುತ್ತಿವೆ. ಕೋಮುವಾದಿ ಕಾರ್ಯಸೂಚಿಯ ಮೂಲಕ‌ ಜನರ‌ ದಿಕ್ಕು ತಪ್ಪಿಸಲಾಗುತ್ತಿದೆ. ಇದರಿಂದ ಬಂಡವಾಳ ಷಾಹಿಗಳ‌ ಲಾಭ ಹೆಚ್ಚುತ್ತಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT