‘ವಾಲ್ಮೀಕಿ ವನ’ದ ಮುಂಭಾಗವೇ ಕನಕದಾಸರ ಪ್ರತಿಮೆ ಸ್ಥಾಪಿಸುವುದರ ಜೊತೆಗೆ ಉದ್ಯಾನವನ್ನೂ ಸೃಷ್ಟಿಸಲಾಗುವುದು. ಇದಕ್ಕೆ ‘ಕನಕ ವನ’ ಎಂದು ಹೆಸರಿಸಲಾಗುವುದು. ಪೀಠ ಮತ್ತು ಪ್ರತಿಮೆ ಸೇರಿ ಒಟ್ಟು 22 ಅಡಿ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ಪ್ರತಿಮೆಯ ಪ್ರತಿಷ್ಠಾಪನೆ ಆಗಲಿದೆ. ಖ್ಯಾತ ಶಿಲ್ಪಿ ಗುಡಿಗಾರ್ ಅವರು ಪ್ರತಿಮೆ ತಯಾರಿಸುತ್ತಿದ್ದಾರೆ ಎಂದು ರೇವಣ್ಣ ವಿವರಿಸಿದರು.