ಕನ್ನಡ ನಾಟಕ ಪರಂಪರೆ ಕೇವಲ ಒಳಾಂಗಣದ ರಂಗಮಂದಿರಗಳ ಚೌಕಟ್ಟಿನಲ್ಲಿ ಬಂಧಿಯಾಗಿ ಏಕತಾನತೆನಿಂದ ನಲುಗಿದ್ದಾಗ ರಂಗಭೂಮಿಗೆ ಹೊಸ ಭಾಷ್ಯ ಬರೆದ ನಾಟಕ ‘ಮಲೆಗಳಲ್ಲಿ ಮದುಮಗಳು’. ರಂಗಪ್ರಯೋಗದಲ್ಲಿ ಪಾಶ್ಚಾತ್ಯ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ಕಾರಣವಾಗಿತ್ತು. ಕಲಾಗ್ರಾಮದಲ್ಲಿನ ಕೆರೆಯಂಗಳರಂಗ, ಬಿದಿರುಮೆಳೆರಂಗ, ಬಯಲುರಂಗ ಮತ್ತು ಹೊಂಗೆರಂಗದಲ್ಲಿ ಮದುಮಗಳು ನಲಿಯುತ್ತಿದ್ದಾಳೆ.