ರಾಮೇಶ್ವರ: ಕಚತೀವು ದ್ವೀಪ ಬಳಿ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡಿನ 13 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಹಲವು ದೋಣಿಗಳು ಹಾಗೂ ಬಲೆಗಳಿಗೆ ಹಾನಿ ಉಂಟು ಮಾಡಿದೆ.
ತಂಗಾಚಿಮದಾಮ ಪ್ರದೇಶದಿಂದ 523 ದೋಣಿಗಳಲ್ಲಿ ಬುಧವಾರ ಹೋಗಿದ್ದ 2,000 ಮೀನುಗಾರರು ಕಚತೀವು ಬಳಿ ಮೀನುಗಾರಿಕೆ ಮಾಡುತ್ತಿದ್ದರು. ಅವರಲ್ಲಿ 13 ಮಂದಿಯನ್ನು ಲಂಕಾ ನೌಕಾಪಡೆ ಬಂಧಿಸಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಮೀನುಗಾರರನ್ನು ಬೆನ್ನಟ್ಟಿದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ, ಬಲೆಗಳಿಗೆ ಹಾನಿ ಮಾಡಿದ್ದು, ಕಬ್ಬಿಣದ ಸಲಾಕೆಯಿಂದ ಹೊಡೆದು ದೋಣಿಗಳನ್ನು ಒಡೆದುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.