ಬಿಜೆಪಿಗೆ ನನ್ನನ್ನು ಕಂಡರೆ ಭಯ. ಗುಜರಾತ್ ಚುನಾವಣೆಯ ನಂತರ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಜಾತಿಗಳು ಇಲ್ಲದೇ ಇರುವ ಭಾರತವನ್ನು ಭಯಸುತ್ತೇವೆ. ಭೀಮಾ–ಕೋರೆಗಾಂವ್ ಸಮರದ 200ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಂತಿಯುತವಾಗಿ ರ್ಯಾಲಿ ನಡೆಸಲು ದಲಿತರಿಗೆ ಹಕ್ಕು ಇಲ್ಲವೇ? ದೇಶದಲ್ಲಿ ದಲಿತ ಮತ್ತು ಇತರ ಅಲ್ಪ ಸಂಖ್ಯಾತ ಸಮುದಾಯದವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಜನವರಿ 9ರಂದು ನವದೆಹಲಿಯಲ್ಲಿ ಯುವ ಅಹಂಕಾರ್ (ಯುವಜನರ ಹೆಮ್ಮೆ) ರ್ಯಾಲಿಯನ್ನು ಆಯೋಜಿಸಲಿದ್ದೇವೆ ಎಂದಿದ್ದಾರೆ ಮೆವಾನಿ.