ಮಂಗಳೂರಿನ ಕದ್ರಿ ದೇವಳದ ಧ್ವನಿವರ್ಧಕದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಧ್ವನಿವರ್ಧಕವನ್ನು ಸ್ಥಗಿತಗೊಳಿಸಬೇಕು ಎಂದು ಡಿಸೋಜ ಎಂಬುವರು ಈಚೆಗೆ ಕೋರ್ಟ್ ಮೊರೆ ಹೋಗಿದ್ದ ಪ್ರಕರಣ ವಿವಾದ ಸೃಷ್ಟಿಸುವಂತೆ ಇತ್ತು. ತಮ್ಮ ಅರ್ಜಿಯು ಎರಡು ಕೋಮಿನ ನಡುವೆ ವೈಮನಸ್ಸಿಗೆ ಕಾರಣವಾಗಬಹುದೆಂಬ ಶಂಕೆ ಮೂಡಿದಾಗ ಡಿಸೋಜ, ದೂರನ್ನು ಹಿಂಪಡೆದರು ಎಂದು ವರದಿಯಾಗಿದೆ. ವೈಯಕ್ತಿಕ ತೊಂದರೆ ಸಹಿಸಿಕೊಂಡು ಸಹಬಾಳ್ವೆಗೆ ಮುಂದಾಗುವ ಡಿಸೋಜ ಅವರಂತಹ ಜನರೇ ನಮ್ಮ ನಿಜವಾದ ಪ್ರತಿನಿಧಿಗಳು.