ಪಾಠ ಮಾಡದ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಜ.3). ಅಂದರೆ, ಶಿಕ್ಷಣ ಇಲಾಖೆ ಏನು ಮಾಡಲು ಹೊರಟಿದೆ? ‘ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಒದಗಿಸಲು ಒತ್ತು ನೀಡಲಾಗುವುದು’ ಎಂದು ಸರ್ಕಾರ ಹೇಳಿದರೆ, ಅದರದೇ ಅಧೀನದ ಶಿಕ್ಷಣ ಇಲಾಖೆಯು ಬೇರೆ ರಾಗ ಹಾಡುತ್ತಿದೆ.