ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ವಾದಿ’ ಪ್ರಧಾನಿ ಮೌನ ಮುರಿಯಲಿ: ಜಿಗ್ನೇಶ್‌ ಮೆವಾನಿ

Last Updated 5 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಪ್ರಧಾನಿ ಮೌನ ಮುರಿಯಲಿ. ಅಂಬೇಡ್ಕರ್‌ವಾದಿ ಎಂದು ಹೇಳಿಕೊಳ್ಳುವ ಪ್ರಧಾನಿ, ಈಗ ಏಕೆ ಮೌನವಾಗಿದ್ದಾರೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ಮೆವಾನಿ ಪ್ರಶ್ನಿಸಿದ್ದಾರೆ.

‘ಜನವರಿ 9ರಂದು ದೆಹಲಿಯಲ್ಲಿ ಆಯೋಜಿಸಿರುವ ಸಾಮಾಜಿಕ ನ್ಯಾಯ ರ‍್ಯಾಲಿಯಲ್ಲಿ ಮನುಸ್ಮೃತಿ ಮತ್ತು ಸಂವಿಧಾನದ ಪ್ರತಿಗಳನ್ನು ಪ್ರಧಾನಿ ಕಚೇರಿಗೆ ಕೊಂಡೊಯ್ಯುವೆ. ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ ಎನ್ನುವ ಪ್ರಶ್ನೆ ಕೇಳುತ್ತೇನೆ’ ಎಂದು ಮೆವಾನಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಪುಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನವಶ್ಯಕವಾಗಿ ನನ್ನನ್ನು ಮತ್ತು ಉಮರ್ ಖಾಲಿದ್‌ನನ್ನು ಗುರಿಯಾಗಿಸಿಕೊಂಡಿವೆ. ಮಹಾರಾಷ್ಟ್ರ ಬಂದ್‌ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ, ಪ್ರಚೋದನಾಕಾರಿ ಭಾಷಣ ಮಾಡಿಲ್ಲ. ನನ್ನ ಭಾಷಣವನ್ನು ವಿಶ್ಲೇಷಿಸಿ, ಅದರಲ್ಲಿ ಪ್ರಚೋದನಕಾರಿ ಅಂಶಗಳು ಇದ್ದವೇ ಎಂಬುದನ್ನು ತಿಳಿಸಲು ಸಂವಿಧಾನ ಪರಿಣತರನ್ನು ಕೇಳಿ’ ಎಂದರು.

‘ಶಾಂತಿಯುತ ರ‍್ಯಾಲಿಗಳನ್ನು ನಡೆಸಲು ದಲಿತರು ಹಕ್ಕು ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನೂ ಪ್ರಧಾನಿ ಸ್ಪಷ್ಟಪಡಿಸಲಿ’ ಎಂದು ಮೆವಾನಿ ಆಗ್ರಹಿಸಿದ್ದಾರೆ.

‘ಡಿಸೆಂಬರ್‌ 31ರ ಸಾರ್ವಜನಿಕ ಸಭೆಯ ನಂತರ ನಾನು ಮೈಗ್ರೇನ್‌ನಿಂದ ಬಳಲುತ್ತಿದ್ದೇನೆ. ಮುಂಬೈನಲ್ಲಿ ನಡೆದ ಕಾರ್ಯಕ್ರದಲ್ಲಿ ಅಥವಾ ಯಾವುದೇ ಬಂದ್‌ನಲ್ಲಿ ಭಾಗವಹಿಸಿಲ್ಲ. ಭೀಮಾ– ಕೋರೆಗಾಂವ್‌ಗೂ ಭೇಟಿ ನೀಡಿಲ್ಲ. ಇಷ್ಟೆಲ್ಲ ಆದರೂ ನನ್ನನ್ನು ಗುರಿಯಾಗಿರಿಸಿರುವುದು ಒಂದು ಸಂಚಿನ ಭಾಗ ಎನಿಸುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT