2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಾಗದೇವನಹಳ್ಳಿ ಬಳಿಯ 20 ಗುಂಟೆ ಜಮೀನಿನ ಡಿನೋಟಿಫೈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ, ‘ಕಳೆದ ಸೆಪ್ಟೆಂಬರ್ 4ರಂದು ನ್ಯಾಯಾಲಯ ಜಾರಿ ಮಾಡಿರುವ ನೋಟಿಸ್ ಭೂಮಾಲೀಕ ಲಿಂಗರಾಜು ಅವರಿಗೆ ತಲುಪಿಸುವಲ್ಲಿ ಪೊಲೀಸರೇ ವಿಫಲವಾದರೆ ಮತ್ತೆ ಯಾರು ತಲುಪಿಸುತ್ತಾರೆ’ ಎಂದು ಪ್ರಶ್ನಿಸಿತು.