ಮೊಳಕಾಲ್ಮುರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎನ್.ವೈ. ಗೋಪಾಲಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಕೆಲ ಕಾರ್ಯಕರ್ತರು ಮನವಿ ಮಾಡಿದರು.
ಶುಕ್ರವಾರ ಬಳ್ಳಾರಿ ಜಿಲ್ಲೆ ತೋರಣಗಲ್ಲಿಗೆ ಬೆಂಗಳೂರು–ಬಳ್ಳಾರಿ ರಾಜ್ಯಹೆದ್ದಾರಿ ಮಾರ್ಗವಾಗಿ ಸಾಗುವಾಗ ತಾಲ್ಲೂಕಿನ ರಾಂಪುರದಲ್ಲಿ ಕೆಲಕಾಲ ನಿಲ್ಲಿಸಿ ಅವರು ಮಾತನಾಡಿದರು.
ಎನ್ವೈಜಿ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದು, ಕಳೆದ ಬಾರಿ ಅತ್ಯಲ್ಪ ಮತಗಳಿಂದ ಪರಾಭವಗೊಂಡರು. ಆ ಬಳ್ಳಾರಿಯಿಂದ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಸಜ್ಜನ ರಾಜಕಾರಣಿಯಾಗಿದ್ದು ಎಲ್ಲಾ ರಂಗಗಳಲ್ಲಿ ಹಿಂದುಳಿದಿರುವ ಮೊಳಕಾಲ್ಮುರು ಕ್ಷೇತ್ರ ಅಭಿವೃದ್ಧಿಗಾಗಿ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಮನವಿ ಮಾಡಿದರು.
ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ವೇಣುಗೋಪಾಲ್ ಹೇಳಿದರು. ನಂತರ ಅವರು ತಾಲ್ಲೂಕಿನ ಮೇಗಲಕಣಿವೆ, ಬಾಂಡ್ರಾವಿ, ರಾಜಾಪುರ, ಸಂಡೂರು ಮಾರ್ಗವಾಗಿ ಸಾಗಿದರು. ಎನ್ವೈಜಿ ಸಹ ಅವರ ಜತೆಯಲ್ಲಿ ಹೋದರು ಎಂದು ಗ್ರಾಮಪಂಚಾಯ್ತಿ ಸದಸ್ಯ ವಿಜಯಕುಮಾರ್ ತಿಳಿಸಿದರು.