ಆದರೆ, ಸರ್ಕಾರದ ಸಾಧನಾ ಸಂಭ್ರಮ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಬಂದಿದ್ದಾಗ, ಮಾಲಕರಡ್ಡಿ ಅವರು ಹೆಲಿಪ್ಯಾಡ್ವರೆಗೂ ಅವರನ್ನು ಹಿಂಬಾಲಿಸಿದ್ದರು. ಇದು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿತ್ತು. ಹೆಲಿಪ್ಯಾಡ್ನಿಂದ ವಾಪಸಾದ ಶಾಸಕರ ಆಪ್ತ ಸಹಾಯಕ, ‘ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರು ಶಾಸಕರಿಗೆ ಸೂಚಿಸಿದ್ದಾರೆ’ ಎಂದು ಹೇಳಿದೊಡನೆ ಎರಡನೇ ಸಾಲಿನ ನಾಯಕರ ಮುಖ ಹುಳ್ಳಗಾಯಿತು.