ಧಾರವಾಡ: ಚುರುಕಿನ ಆಟವಾಡಿದ ಧಾರವಾಡ ತಂಡ ಇಲ್ಲಿನ ಕುಮಾರೇಶ್ವರ ಸಾಂಸ್ಕೃತಿಕ ಸಂಸ್ಥೆ, ಫ್ರೆಂಡ್ಸ್ ಸೋಷಿಯಲ್ ಕ್ಲಬ್ ಸಹಯೋಗದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಆಹ್ವಾನಿತ ಹೊನಲು, ಬೆಳಕಿನ ಕೊಕ್ಕೊ ಟೂರ್ನಿಯ ಪಂದ್ಯದಲ್ಲಿ ಗೆದ್ದಿತು.
ಮೊದಲ ಪಂದ್ಯದಲ್ಲಿ ರಾಣೇಬೆನ್ನೂರು ವಿರುದ್ಧದ ಪಂದ್ಯದಲ್ಲಿ ಧಾರವಾಡ ತಂಡ ಒಂದು ಸುತ್ತು ಹಾಗೂ 5 ಅಂಕಗಳೊಂದಿಗೆ ಜಯ ಗಳಿಸಿತು.
ಮತ್ತೊಂದು ಪಂದ್ಯದಲ್ಲಿ ಸಂಶಿ ತಂಡದ ವಿರುದ್ಧ ರಟ್ಟಿಹಳ್ಳಿ ತಂಡ ವಿಜಯಿಯಾಯಿತು.
ತುಮಕೂರಿನ ವಿವೇಕಾನಂದ ತಂಡದ ವಿರುದ್ಧ ಬೆಳಗಾವಿ ತಂಡ ಜಯಿಸಿತು.
ವಿಜಯೀ ತಂಡದ ಪರವಾಗಿ ಮಾರುತಿ 9 ಅಂಕಗಳ್ನು ಗಳಿಸಿದರು. ಬೆಂಗಳೂರಿನ ಮಾನಸ ತಂಡದ ವಿರುದ್ಧ ಬಸವ ಕ್ರೀಡಾ ಸಂಸ್ಥೆ ತಂಡ 13 ಅಂಕಗಳಿಂದ ಜಯಗಳಿಸಿತು. ಮೈಸೂರಿನ ಸ್ಫೂರ್ತಿ ತಂಡದ ವಿರುದ್ಧ ರಟ್ಟಿಹಳ್ಳಿಯ ಹೊಯ್ಸಳ ತಂಡ 3 ಅಂಕಗಳಿಂದ ಗೆದ್ದಿತು.
ಜಮಖಂಡಿ ಕ್ರೀಡಾ ಸಂಸ್ಥೆಯ ವಿರುದ್ಧ ಧಾರವಾಡ ಕ್ರೀಡಾ ಸಂಸ್ಥೆ 10 ಅಂಕಗಳ ಜಯ ಸಾಧಿಸಿತು.
ಬೆಳಗಾವಿ ಕ್ರೀಡಾ ಸಂಸ್ಥೆ ತಂಡದ ವಿರುದ್ಧ ಅಮರಾವತಿ ತಂಡ 2 ಅಂಕಗಳ ಜಯ ಸಾಧಿಸಿತು.