ಬೆಂಗಳೂರು: ಗಾಂಧಿನಗರ ವಾರ್ಡ್ ವ್ಯಾಪ್ತಿಯ ಕಾಳಿದಾಸ ರಸ್ತೆಯಿಂದ ಸುಬೇದಾರ್ ಛತ್ರ ರಸ್ತೆಯವರೆಗಿನ 6ನೇ ಅಡ್ಡರಸ್ತೆಗೆ ‘ವಜ್ರೇಶ್ವರಿ ರಸ್ತೆ’ ಎಂದು ನಾಮಕರಣ ಮಾಡಲು ಬಿಬಿಎಂಪಿ ನಿರ್ಧರಿಸಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಪಾಲಿಕೆಯ ಆಯುಕ್ತರಿಗೆ 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬಹುದು. ನಾಮಕರಣ ಮಾಡುವ ಕುರಿತು 2017ರ ನವೆಂಬರ್ 28ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.