ಮಂಗಳೂರು: ಬಶೀರ್ ಅವರ ಎರಡನೇ ಪುತ್ರ ಅಬುಧಾಬಿಯಲ್ಲಿದ್ದು, ಅಲ್ಲಿಂದ ಹೊರಟಿದ್ದಾರೆ. ಸಂಜೆ 6 ಗಂಟೆ ಇಲ್ಲಿಗೆ ತಲುಪುವ ನಿರೀಕ್ಷೆ ಇದ್ದು, ಆ ಬಳಿಕ ಕೂಳೂರಿನ ಮಸೀದಿ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ನಗರದ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹಮ್ಮದ್ ಬಶೀರ್ ಭಾನುವಾರ ನಿಧನರಾದರು.
ಅವರ ಅಂತ್ಯಸಂಸ್ಕಾರವನ್ನು ಕುಳೂರು ಮಸೀದಿಯಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ.
ಮೊದಲು ಮೃತದೇಹವನ್ನು ಆಕಾಶಭವನದಲ್ಲಿನ ಮನೆಗೆ ಸಾಗಿಸಿ ಬಳಿಕ ಮಸೀದಿಗೆ ತರಲಾಗುತ್ತದೆ.