ಬೆಳ್ತಂಗಡಿ: ‘ಎಲ್ಲರ ಜೀವಕ್ಕೂ ಬೆಲೆ ಇದೆ. ಜಾತಿ, ಧರ್ಮಗಳ ಆಧಾರದಲ್ಲಿ ವಿಂಗಡಣೆ ಬೇಡ. ಕೆಲವರು ಶವ ಮುಂದಿಟ್ಟುಕೊಂಡ ರಾಜಕಾರಣ ಮಾಡುತ್ತಿದ್ದಾರೆ, ಅಂಥದ್ದು ಕೊನೆಗೊಳ್ಳಬೇಕು’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಸಾಧನಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶವದ ಮೇಲೆ ರಾಜಕಾರಣ ಮಾಡುವವರನ್ನು ತಿರಸ್ಕರಿಸಿ. ಸಂಘಟಿತ ಅಪರಾಧ ಮತ್ತು ಗೂಂಡಾಗಿರಿಯನ್ನು ಯಾವುದೇ ಧರ್ಮ, ಜಾತಿಯವರು ಮಾಡಿದರೂ ತಿರಸ್ಕರಿಸಬೇಕು.
ಬಿಜೆಪಿ ಅವರು ತೋಳ ಕುರಿ ಕಥೆಯಂತೆ ಆಟ ಆಡುತ್ತಿದ್ದಾರೆ. ಅವರೇ ಬೆಂಕಿ ಹಾಕಿ ರಮಾನಾಥ್ ರೈ ವಿರುದ್ದ ಆರೋಪ ಮಾಡುತ್ತಿದ್ದಾರೆ’ ಎಂದರು.