ಬೆಂಗಳೂರು: ಕೇಶವ ಸೇವಾ ಸಮಿತಿಯು ಸಾಮಾಜಿಕವಾಗಿ ಹಿಂದುಳಿದ ಮಕ್ಕಳಿಗಾಗಿ ನಗರದಲ್ಲಿ ಭಾನುವಾರ ಆರೋಹಣ ಸ್ಪರ್ಧೆ ಆಯೋಜಿಸಿತ್ತು.
ಸ್ಪರ್ಧೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹೆಚ್ಚು ಗಮನ ಸೆಳೆಯಿತು. ಸೋಲಾರ್ ವ್ಯವಸ್ಥೆ, ರಾಕೆಟ್, ಹಾರ್ಲೆ ಡೇವಿಡ್ಸನ್ ಲಘುವಾಹನ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಕಲಾಕೃತಿಗಳನ್ನು ಮಕ್ಕಳು ಪ್ರದರ್ಶಿಸಿದರು. ಇವುಗಳ ಎಲ್ಲರ ಗಮನ ಸೆಳೆದವು.
ಅಭ್ಯುದಯ ಯೋಜನೆ ಅಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಕೊಳೆಗೇರಿ ಹಾಗೂ ಗ್ರಾಮೀಣ ಭಾಗದಿಂದ 1,600 ಮಕ್ಕಳು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಮಿಮಿಕ್ರಿ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ವಿಜೇತ ಮಕ್ಕಳಿಗೆ ಚಿತ್ರ ನಟ ಜಗ್ಗೇಶ್ ಬಹುಮಾನ ವಿತರಿಸಿದರು.