ಇಂದಿರಾನಗರದ ಸಂತೋಷ್ (34), ರೌಡಿಶೀಟರ್ ರಾಮಚಂದ್ರ (29), ಪ್ರವೀಣ್ (23), ಪುಟ್ಟರಾಜು (26), ಐಟಿಐ ವಿದ್ಯಾರ್ಥಿ ನಿಖಿಲ್ ಒಲಿವರ್ (23) ಹಾಗೂ ಹಲಸೂರಿನ ಕಾರ್ತಿಕ್ (28) ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ಒಂದು ಕಾರು, ‘ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ’ ಹೆಸರಿನಲ್ಲಿದ್ದ ಗುರುತಿನ ಚೀಟಿಗಳು ಹಾಗೂ ವಿಸಿಟಿಂಗ್ ಕಾರ್ಡ್ಗಳನ್ನು ಜಪ್ತಿ ಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.