ಬೆಂಗಳೂರು: ಅಸ್ಪೃಶ್ಯತೆ, ಅಸಮಾನತೆ, ಅಧರ್ಮಗಳ ವಿರುದ್ಧ ಜಾಗೃತಿ ಮೂಡಿಸಲು ಸಮತಾ ಭಾರತಿ ಟ್ರಸ್ಟ್ , ಬೆಂಗಳೂರು ದೇವಸ್ಥಾನಗಳ ಒಕ್ಕೂಟದ ವತಿಯಿಂದ ಫೆ 20ರಂದು ಧರ್ಮಕ್ರಾಂತಿ ಸಮ್ಮೇಳನ ಏರ್ಪಡಿಸಲಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಕ್ರಾಂತಿ ಸಾರಥಿ ಸಾಸಾರಾಂ, ‘ಗವಿಪುರ ಲಕ್ಷ್ಮಿಪುರ ಮುಖ್ಯ ರಸ್ತೆಯ ಬಂಡೆಮಹಾಂಕಾಳಮ್ಮ ದೇವಸ್ಥಾನದಲ್ಲಿ ಸಮ್ಮೇಳನ ನಡೆಯಲಿದೆ. ಧರ್ಮ ಚಿಂತನ– ಮಂಥನ, ಧರ್ಮ ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.