‘ನಗರದಲ್ಲಿ ಈಚೆಗೆ ನಡೆದ ಪೈಶಾಚಿಕ ಕೃತ್ಯ ಖಂಡಿಸಿ, ಜ 9ರ ಮಂಗಳವಾರ ವಿಜಯಪುರ ಚಲೋ ಹಮ್ಮಿಕೊಳ್ಳಲಾಗಿತ್ತು. ವಿವಿಧೆಡೆಯ ಹೋರಾಟಗಾರರು ಈ ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದ ಸ್ಥಳ ಪರಿಶೀಲಿಸುವ ಸಂದರ್ಭ ಪರಶುರಾಮ ಲಂಬು, ಕುಮಾರ ಶಹಾಪುರ ಎಂಬುವರು ಹಲ್ಲೆ ನಡೆಸಿದರು’ ಎಂದು ಹೋರಾಟದ ಮುಂಚೂಣಿ ವಹಿಸಿರುವ ಶ್ರೀನಾಥ ಪೂಜಾರಿ, ಬಿ.ಆರ್.ಭಾಸ್ಕರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.