ದಲಿತ ಸಂಘಟನೆ ಭೀಮ್ ಆರ್ಮಿಯ ಸಂಸ್ಥಾಪಕರ ಬಿಡುಗಡೆಯ ಬೇಡಿಕೆ, ಶೈಕ್ಷಣಿಕ, ಉದ್ಯೋಗ, ಜೀವಿಸುವ ಹಕ್ಕು ಮತ್ತು ಲಿಂಗ ಅಸಮಾನತೆಯ ವಿರುದ್ಧ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ‘ಯುವ ಹೂಂಕಾರ್ ರ್ಯಾಲಿ’ ಹಮ್ಮಿಕೊಳ್ಳಲಾಗಿದೆ. ಮೇವಾನಿ ಮತ್ತು ಅಸ್ಸಾಂನ ಕೃಷಿಕಾರ್ಮಿಕರ ಸಂಘಟನೆಯ ನಾಯಕ ಅಖಿಲ್ ಗೊಗೊಯ್ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.