ಜಿಲ್ಲೆಗೆ ಮರಳಿದ ಮೇಘಣ್ಣವರ: ಪ್ರಾದೇಶಿಕ ಆಯುಕ್ತರಾಗ ಅಧಿಕಾರ ವಹಿಸಿಕೊಂಡಿರುವ ಪಿ.ಎ. ಮೇಘಣ್ಣವರ ಬೆಳಗಾವಿ ಜಿಲ್ಲೆ ಚಿಕ್ಕೋಡಿಯವರು .1991ರ ಬ್ಯಾಚಿನ ಕೆ.ಎ.ಎಸ್ಅ ಧಿಕಾರಿಯಾಗಿರುವ ಇವರು ಜಿಲ್ಲೆಯ ವಿವಿಧೆಡೆ ಕಾರ್ಯ ನಿರ್ವಹಿಸಿದ್ದಾರೆ. ಬೈಲಹೊಂಗಲದಲ್ಲಿ ಉಪವಿಭಾಗಾ ಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ, ಆಯುಕ್ತ, ಬುಡಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಅವರು, ಐಎಎಸ್ಗೆ ಬಡ್ತಿ ಪಡೆದ ನಂತರ ಅವರು ಧಾರವಾಡ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿದ್ದರು. ಇಲ್ಲಿಗೆ ಬರುವ ಮುಂಚೆ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.