ರಾಮನಗರ: ಜಿಲ್ಲೆಯ ಮಾಗಡಿ ತಾಲ್ಲೂಕಿನ ಭದ್ರಾಪುರ ಗೇಟ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ.
ಮಾಗಡಿ ಮಂಡಿಯ ತರಕಾರಿ ವ್ಯಾಪಾರಿ ಚಿಕ್ಕಹನುಮಯ್ಯ (35) ಮೃತ ವ್ಯಕ್ತಿ. ಮಾವಿನ ತೋಪಿನಲ್ಲಿ ಶವ ಪತ್ತೆಯಾಗಿದ್ದು, ತಲೆ ಮೇಲೆ ಗಾಯದ ಗುರುತುಗಳಿವೆ.
ಇವರು ಮಾಗಡಿಯ ಮಹಿಳೆಯೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದು, ಸೋಮವಾರ ರಾತ್ರಿ ಆಕೆಯ ಜತೆ ತೆರಳಿದ್ದರು ಎನ್ನಲಾಗಿದೆ. ಆಕೆಯೇ ಕೊಲೆ ಮಾಡಿಸಿರಬಹುದು ಎಂದು ಮೃತರ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.