ಮೂಕಿಕೆರೆ ಗ್ರಾಮದ ಮಹೇಶ್ (ಅಂಗವಿಕಲ) 7 ವರ್ಷಗಳ ಹಿಂದೆ ಬೆಂಗಳೂರು ಸೇರಿದ್ದರು. ಬೆಂಗಳೂರಿನ ಹಲವು ವೈನ್ ಶಾಪ್ ಮತ್ತು ಬಾರ್ಗಳಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಜಮೀನಿನ ಕೆಲಸ ಇದ್ದ ಕಾರಣ ಒಂದು ತಿಂಗಳು ರಜೆ ಹಾಕಿ ಗ್ರಾಮಕ್ಕೆ ಬಂದು, ಕೃಷಿ ಕೆಲಸ ಮುಗಿಸಿ, ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಹಿಂದೆ ಇದ್ದ ಕಡೆ ಕೆಲಸಕ್ಕೆ ಸೇರಿಸಿಕೊಳ್ಳದ ಕಾರಣ, ಭಾನುವಾರವಷ್ಟೇ ಕೈಲಾಶ್ ಬಾರ್ನಲ್ಲಿ ಕೆಲಸ ಕೇಳಿದ್ದರು. ನಾಳೆ ಯಿಂದ ಕೆಲಸ ಮಾಡು ಎಂದು ಅಲ್ಲಿ ಯವರು ಹೇಳಿದ್ದರು. ಮಲಗಲು ಜಾಗ ಇಲ್ಲದ ಕಾರಣ ಮಹೇಶ್ ಅಲ್ಲಿ ತಂಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.