‘ಬಂಡಿಹಾಳ ರಸ್ತೆಗೆ ಹೊಂದಿಕೊಂಡ ಈ ಓಣಿಯಲ್ಲಿ ಅಗತ್ಯ ಸೌಲಭ್ಯಗಳು ಇದ್ದು ಇಲ್ಲದಂತಿದೆ. ಈ ಓಣಿಯೊಳಗೆ ಹೋಗಲು ಚರಂಡಿ ಮೇಲೆ ನಿರ್ಮಿಸಿದ ಈ ಸೀಡಿಯ ಬಹುಭಾಗ ಕಿತ್ತು ಹೋಗಿದೆ. ಕೇವಲ ನಾಲ್ಕೈದು ತಿಂಗಳ ಹಿಂದಷ್ಟೇ ಈ ಸೀಡಿ ನಿರ್ಮಿಸಿದ್ದು, ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿರುವುದರಿಂದ ಹಾಳಾಗಿದೆ. ಕಳಪೆ ಕೆಲಸ ಮಾಡಿದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜನಕಲ್ಯಾಣ ವೇದಿಕೆಯ ಶರಣಪ್ಪ ಪಾಟೀಲ ಆಗ್ರಹಿಸಿದ್ದಾರೆ.