‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ 2017ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಸಂಬಂಧಿಸಿದ ವರದಿ ಹಾಗೂ ಇದರ ಸಂಬಂಧ ‘ವಾಚಕರ ವಾಣಿ’ಯಲ್ಲಿ ಪ್ರಕಟವಾಗಿರುವ ಪತ್ರಕ್ಕೆ (ಜ.9) ಒಂದು ಸ್ಪಷ್ಟೀಕರಣ: ಭಾಷಾಂತರ ವಿಭಾಗದ ತೀರ್ಪುಗಾರರಾಗಿ ನಾವು ಮೂವರು, ಡಾ. ಕೆ.ಆರ್. ಸಂಧ್ಯಾರೆಡ್ಡಿ, ಜ.ನಾ.ತೇಜಶ್ರೀ ಹಾಗೂ ಪ್ರೊ. ತೇಜಸ್ವಿ ಕಟ್ಟೀಮನಿ ನಿಯೋಜಿತವಾಗಿದ್ದೆವು. ನಮ್ಮ ಆಯ್ಕೆಯು ಭಾಷಾಂತರ ಕೃತಿಗಳಿಗೆ ಮಾತ್ರ ಸೀಮಿತವಾಗಿತ್ತು. ಸೃಜನಶೀಲ ವಿಭಾಗದ ಆಯ್ಕೆ ಸಮಿತಿ ಬೇರೆಯೇ ಇದೆ ಎಂದು ಈ ಮೂಲಕ ಸ್ಪಷ್ಟೀಕರಿಸುತ್ತಿದ್ದೇವೆ.