ಬಳ್ಳಾರಿ: ‘ನಾನು ಬೇವರ್ಸಿ ಅಲ್ಲ, ನನಗೆ ಮೂರು ಪಕ್ಷಗಳಿಂದ ಆಫರ್ ಇದೆ’ ಎಂದು ನಗರ ಶಾಸಕ ಅನಿಲ್ ಲಾಡ್ ಆಕ್ರೋಶದಿಂದ ನುಡಿದರು.
ಆಶ್ರಯ ಯೋಜನೆ ಸಂಬಂಧ ಮಾಹಿತಿ ನೀಡಲು ನಗರದಲ್ಲಿನ ತಮ್ಮ ಮನೆಯಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಚುನಾವಣೆ ಟಿಕೆಟ್ ವಿಷಯ ಪ್ರಸ್ತಾಪವಾದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
‘ನನಗೆ ಟಿಕೆಟ್ ಸಿಗುವುದಿಲ್ಲ ಎಂದು ನಮ್ಮ ಕಾಂಗ್ರೆಸ್ ಪಕ್ಷದೊಳಗಿನವರೇ ಊಹಾಪೋಹ ಹಬ್ಬಿಸುತ್ತಿದ್ದಾರೆ. ಅದರ ಹಿಂದೆ ಕಾಣದ ಶಕ್ತಿಗಳ ಕೈವಾಡವಿದೆ’ ಎಂದು ಅವರು ಕೆಲವು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.