ತಕ್ಷಣವೇ ಟಿ.ವಿ ಕ್ಯಾಮೆರಾಗಳು ವೈಜನಾಥ ಪಾಟೀಲರನ್ನು ಮುತ್ತಿಕೊಂಡವು. ಅವರನ್ನು ಅಲ್ಲಿಂದ ತೆರವು ಮಾಡಲು ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ರಾಧಾಕೃಷ್ಣ ಹರಸಾಹಸ ಮಾಡಿದರೂ ಸಫಲರಾಗಲಿಲ್ಲ. ‘ನಿಮ್ಮ ಸಮಸ್ಯೆಯೇನು? ಏನನ್ನು ಕೇಳಲು ಬಂದಿದ್ದೀರಿ’ ಎಂದು ಪಾಟೀಲರನ್ನು ಪ್ರಶ್ನಿಸಿದಾಗ, ‘ಅಧ್ಯಕ್ಷರ ಜತೆ ಮಾತನಾಡಲು ಬಂದೆ. ಆದರೆ ಮಾತನಾಡಲು ತಯಾರಿಲ್ಲ ಎದ್ದು ಓಡಿ ಹೋದರು’ ಎಂದರು.