ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಲಸೆ ಶೀರ್ಷಿಕೆಯಡಿಯಲ್ಲಿ ನಾಟಕೋತ್ಸವ ಆಯೋಜಿಸಿದ್ದೇವೆ. ಸಂಜೆ 5.30ಕ್ಕೆ ಸಾಹಿತಿ ಡಾ. ಗಿರೀಶ್ ಕಾರ್ನಾಡ ಚಾಲನೆ ನೀಡಲಿದ್ದಾರೆ. ದೇಶದ ಅನ್ಯ ಭಾಷೆಗಳ 9 ನಾಟಕಗಳು, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಂಡಗಳಿಂದ 9 ಕನ್ನಡ ನಾಟಕಗಳು, 6 ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದರು.