ಬಂಧಿತ ಉಮೇಶ್ ಮತ್ತು ರಮೇಶ್ ಇಬ್ಬರೂ ಬಜರಂಗದಳದಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಬಿಜೆಪಿಯಲ್ಲೂ ಸಕ್ರಿಯರಾಗಿದ್ದರು. ದಲಿತ ಕುಟುಂಬದ ಮಹಿಳೆಯ ಮನೆಗೆ ತೆರಳಿದ್ದ ಆರೋಪಿಗಳು, ‘ನಿಮ್ಮ ಮಗಳು ಮುಸ್ಲಿಂ ಯುವಕನ ಜತೆ ಮಾತನಾಡುತ್ತಿದ್ದಾಳೆ. ತಕ್ಷಣ ನಿಲ್ಲಿಸಲು ಹೇಳಿ. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ, ನಿಮ್ಮನ್ನು ಊರಿನಿಂದಲೇ ಹೊರಗೆ ಹಾಕಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದ್ದರು.