ಮುಳಗುಂದ: ಗದಗ ಹಾಗೂ ಲಕ್ಷ್ಮೇಶ್ವರ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಬಸಾಪುರ ಕ್ರಾಸ್ ಹಾಗೂ ಪಟ್ಟಣ ಪ್ರವೇಶಿಸುವ 3 ರಸ್ತೆ ಮಾರ್ಗಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕ, ರಸ್ತೆ ಉಬ್ಬು (ರೋಡ್ ಬ್ರೆಕ್) ಹಾಕಿಲ್ಲ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಬೈಕ್ ಸವಾರರು, ವಾಹನ ಚಾಲಕರಿಗೆ ತಲೆನೋವಾಗಿ ಪರಿಣಮಿದ್ದು ದಿನೇದಿನೇ ಅಪಘಾತ ಸಂಭವಿಸುವಂತಾಗಿದೆ.