ಬಾರ್ಗೆ ಬೆಂಕಿ ಹತ್ತಿಕೊಂಡು ಐವರು ಕೆಲಸಗಾರರು ಸಾವನ್ನಪ್ಪಿದ್ದು, ಸೋಮಸುಂದರ ಪಾಳ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ಎಸ್ಟಿಪಿ ಸ್ವಚ್ಛಗೊಳಿಸಲು ಹೋಗಿ ಮೂವರು ಪ್ರಾಣ ಕಳೆದುಕೊಂಡದ್ದು, ರಾಜ ಕಾಲುವೆಯಲ್ಲಿ ಎರಡೂವರೆ ವರ್ಷದ ಮಗು ಬಿದ್ದು ಸತ್ತಿದ್ದು... ಇವು ಬೆಂಗಳೂರಿನಲ್ಲಿ ಈ ವಾರ ದಾಖಲಾದ ಕೆಲವು ದಾರುಣ ಸಾವಿನ ಪ್ರಕರಣಗಳು.