ಘಟನೆ ನಡೆದ ದಿನ ಬಂಧಿತರಾಗಿ ಧಾರವಾಡ ಜೈಲಿಗೆ ಹೋಗಿದ್ದ 62 ಮಂದಿಗೆ, ಎರಡು ದಿನಗಳ ನಂತರ 1ನೇ ಹೆಚ್ಚುವರಿ ನ್ಯಾಯಾಲಯವು ಕೆಲವು ಷರತ್ತಿನೊಂದಿಗೆ (ಊರು ಬಿಟ್ಟು ಹೋಗುವಂತಿಲ್ಲ, ಪ್ರತಿದಿನ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಬೇಕು) ಮಧ್ಯಂತರ ಜಾಮೀನು ನೀಡಿತ್ತು. ಮಂಗಳವಾರ ಪ್ರಕರಣದ ಮುಂದಿನ ವಿಚಾರಣೆ ನಡೆಸಿದ ನ್ಯಾಯಾಲಯವು, ಷರತ್ತನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ. ಹೀಗಾಗಿ ಅವರೆಲ್ಲರನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.