ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯ ಪಿ.ಕೆ.ಶ್ರೀಜಿತ್, ಸಂದೇಶ್ ಕೋಟ್ಯಾನ್, ಪಡೀಲ್ ನಿವಾಸಿಗಳಾದ ಧನುಷ್ ಪೂಜಾರಿ ಮತ್ತು ಕಿಶನ್ ಪೂಜಾರಿ ಎಂಬವರನ್ನು ಬಂಧಿಸಲಾಗಿದೆ. ಇದೇ 3ರಂದು ರಾತ್ರಿ ಬಶೀರ್ ಕೊಲೆಗೆ ಯತ್ನಿಸಿದ ಬಳಿಕ ನೇತ್ರಾವತಿ ಸೇತುವೆ ಮೇಲಿನಿಂದ ಮಾರಕಾಸ್ತ್ರ ಮತ್ತು ಮೊಬೈಲ್ಗಳನ್ನು ಎಸೆದು ಮಂಜೇಶ್ವರಕ್ಕೆ ತೆರಳಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.