ಗುತ್ತಿಗೆದಾರರ ಜತೆ ಬುಧವಾರ ಸಂಜೆ ಸಂಧಾನ ಸಭೆ ನಡೆಸಿ ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, 'ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇವೆ. ಇಲಾಖೆ ಒಪ್ಪದಿದ್ದರೆ ಆ ಮೊತ್ತವನ್ನು ಪಾಲಿಕೆಯಿಂದಲೇ ಪಾವತಿಸುತ್ತೇವೆ’ ಎಂದು ಭರವಸೆ ನೀಡಿದರು. ಅದಕ್ಕೆ ಒಪ್ಪಿದ ಗುತ್ತಿಗೆದಾರರು, ಮುಷ್ಕರ ಕೈಬಿಡುವುದಾಗಿ ಹೇಳಿದರು.