17 ಮಂದಿ ಸಾವು: ಮ್ಯಾನ್ಹೋಲ್ಗಳು, ಸೆಪ್ಟಿಕ್ ಟ್ಯಾಂಕ್ ಹಾಗೂ ಎಸ್ಟಿಪಿಗಳಿಗೆ ಇಳಿದು ರಾಜ್ಯದಾದ್ಯಂತ 68 ಮಂದಿ ಸತ್ತಿದ್ದಾರೆ. ಈ ಪೈಕಿ 17 ಮಂದಿ ನಗರದಲ್ಲಿ ಅಸುನೀಗಿದ್ದಾರೆ. ಈ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಇದುವರೆಗೆ ಶಿಕ್ಷೆ ಆಗಿಲ್ಲ. ತಂತ್ರಜ್ಞಾನದಲ್ಲಿ ಮುಂದುವರೆದ ಬೆಂಗಳೂರಿನಲ್ಲಿಯೇ ಇಂಥ ಪರಿಸ್ಥಿತಿ ಇದ್ದರೆ, ಬೇರೆ ನಗರಗಳ ಸ್ಥಿತಿ ಏನು ಎಂದು ಅಧಿಕಾರಿಗಳನ್ನು ಜಗದೀಶ್ ಪ್ರಶ್ನಿಸಿದರು.