‘ಹೊಸ ವರ್ಷದ ಪ್ರಯುಕ್ತ ಆ ರಾತ್ರಿ ಪಾರ್ಟಿ ಮಾಡಿ ಪಾನಮತ್ತರಾಗಿದ್ದೆವು. ನಂತರ ಗೆಳೆಯರೆಲ್ಲ ಬೈಕ್ಗಳಲ್ಲಿ ಮೋಜಿನ ಸುತ್ತಾಟಕ್ಕೆ ಹೊರಟೆವು. ನಾವಿಬ್ಬರೂ ಶಾಕಾಂಬರಿನಗರದ ಕಡೆಗೆ ಬಂದಾಗ, ನಮಗೆ ಒಂಟಿ ಯುವಕನೊಬ್ಬ ಎದುರಾದ. ಅವನನ್ನು ಬೆದರಿಸಿ ಸುಲಿಗೆ ಮಾಡಲು ಯತ್ನಿಸಿದೆವು. ಹಣ ಕೊಡಲು ನಿರಾಕರಿಸಿದ ಆತ, ನಮ್ಮ ಮೇಲೆಯೇ ಹಲ್ಲೆಗೆ ಮುಂದಾದ. ಜಗಳ ಅತಿರೇಕಕ್ಕೆ ಹೋದಾಗ ನಮ್ಮಿಂದ ಕೊಲೆ ನಡೆಯಿತು’ ಎಂದು ಆರೋಪಿಗಳು ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.