ಮುಂಬೈ: ನಗರದ ಕಮಲಾ ಮಿಲ್ಸ್ ಕಾಂಪೌಂಡ್ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಒನ್ ಅಬೋವ್ ಮಾಲೀಕರು(ಸಂಘವಿ ಸಹೋದರರು) ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಡಿ. 29ರ ರಾತ್ರಿ ಒನ್ ಅಬೋವ್ ಪಬ್ನಲ್ಲಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ ವೇಳೆ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಈ ಘಟನೆಯ ಬಳಿಕ ಪಬ್ ಮಾಲೀಕರಾದ ಜಿಗರ್ ಸಂಘವಿ, ಕೃಪೇಶ್ ಸಂಘವಿ ತಲೆಮರೆಸಿಕೊಂಡಿದ್ದರು.