‘ಸಹಕಾರ ಧುರೀಣ ದಿ. ಕೆ.ಎಚ್.ಪಾಟೀಲ ಅವರ ಬಗ್ಗೆ ಗೌರವ ಇದೆ. ಈಗಾಗಲೇ ಅವರ ಹೆಸರನ್ನು ಅನೇಕ ಸಂಸ್ಥೆಗಳಿಗೆ ನಾಮಕರಣ ಮಾಡಲಾಗಿದೆ. ಈಗ ಮತ್ತೆ ಈ ರಸ್ತೆಗೆ ಅವರ ಹೆಸರನ್ನು ಇಟ್ಟಿರುವುದು ಸರಿಯಾದ ಕ್ರಮವಲ್ಲ. ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರನಾಯಕರ, ಪುಣ್ಯ ಪುರುಷರ ಹೆಸರನ್ನು ಈ ರಸ್ತೆಗೆ ಇಟ್ಟಿದ್ದರೆ ಹೆಚ್ಚಿನ ಶೋಭೆ ಇರುತ್ತಿತ್ತು. ಸಚಿವರು ಮುಂದೊಂದು ದಿನ ಗದಗ ನಗರದ ಹೆಸರನ್ನೂ ಬದಲಾಯಿಸಿದರೂ ಅಚ್ಚರಿ ಪಡೆಬೇಕಾಗಿಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.