ಮೊಬೈಲ್ ಸಿಮ್ಗಳ ಮರು ದೃಢೀಕರಣಕ್ಕೆ ಮಾರ್ಚ್ 31ರ ಗಡುವನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಹಾಗಾಗಿ, ಗ್ರಾಹಕರ ಹಿತವನ್ನು ದೃಷ್ಟಿಯಲ್ಲಿರಿಸಿ
ಏರ್ಟೆಲ್ಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ ಎಂದು ಮೂಲ ತಿಳಿಸಿದೆ.
***
‘ಕುದುರೆ ಹೋದಮೇಲೆ ಲಾಯಕ್ಕೆ ಬೀಗ’
‘ಹಲವು ಸೇವಾ ಕಂಪೆನಿಗಳ ಜತೆ ಕೋಟ್ಯಂತರ ಜನರು ತಮ್ಮ ಆಧಾರ್ ವಿವರವನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಆಧಾರ್ಗೆ ಪರ್ಯಾಯ ಸಂಖ್ಯೆಯನ್ನು ನೀಡುವ ಯುಐಡಿಎಐನ ಕ್ರಮ, ಕುದುರೆಗಳೆಲ್ಲಾ ಓಡಿಹೋದ ಮೇಲೆ ಲಾಯಕ್ಕೆ ಬೀಗ ಹಾಕಿದಂತಿದೆ’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.