ನವದೆಹಲಿ: ಕೇರಳದಲ್ಲಿರುವ 180 ವರ್ಷಗಳಷ್ಟು ಹಳೆಯದಾಗಿರುವ ಮುಲ್ಲಪೆರಿಯಾರ್ ಅಣೆಕಟ್ಟಿನ ಸ್ಥಳದಲ್ಲಿ ಸಂಭವಿಸಬಹುದಾದ ‘ಅನಿರೀಕ್ಷಿತ’ ವಿಪತ್ತಿನ ಬಗ್ಗೆ ಗಮನ ಹರಿಸಲು ಮೂರು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೆ ನಿರ್ದೇಶಿಸಿದೆ.