ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಿರಂತರದಿಂದ ಸಿಜಿಕೆ ಸ್ಮರಣೆ

Last Updated 11 ಜನವರಿ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಅವರ ನೆನಪು ಶಾಶ್ವತವಾಗಿಸುವ ಕೆಲಸ ಆಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಹೇಳಿದರು.

‘ರಂಗ ನಿರಂತರ’ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಿಜಿಕೆ 12ನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಜಿಕೆ ನನಗೆ ಆತ್ಮೀಯರಾಗಿದ್ದರು. ಅವರ ನಡೆ–ನುಡಿಯನ್ನು ಇಂದಿಗೂ ಅನುಕರಿಸುತ್ತೇನೆ. ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು ಸರಳತೆಯಿಂದ, ಸ್ವಾರ್ಥ ರಹಿತವಾಗಿ ಬದುಕಿದ್ದರು’ ಎಂದರು.

‘ರಂಗಭೂಮಿಗೆ ವಿಶಾಲವಾದ ಸಾಂಸ್ಕೃತಿಕ ತಳಹದಿ ಹಾಕಿಕೊಟ್ಟಿದ್ದ ಸಿಜಿಕೆ, ಅದನ್ನೇ ತನ್ನ ಜೀವ ಎಂದು ಭಾವಿಸಿದ್ದರು. ಆಧುನಿಕ ಕನ್ನಡ ರಂಗಭೂಮಿ ಉತ್ಕರ್ಷಕ್ಕೆ ಅವರೇ ಕಾರಣ. ಹೀಗಾಗಿ, ಅವರ ವ್ಯಕ್ತಿತ್ವದ ಕುರಿತು ಗ್ರಂಥ ರಚನೆ ಅಥವಾ ಅವರ ಹೆಸರಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಬೇಕು. ಅದಕ್ಕೆ ನನ್ನಿಂದಾಗುವ ಸಹಾಯ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT