‘ರಂಗಭೂಮಿಗೆ ವಿಶಾಲವಾದ ಸಾಂಸ್ಕೃತಿಕ ತಳಹದಿ ಹಾಕಿಕೊಟ್ಟಿದ್ದ ಸಿಜಿಕೆ, ಅದನ್ನೇ ತನ್ನ ಜೀವ ಎಂದು ಭಾವಿಸಿದ್ದರು. ಆಧುನಿಕ ಕನ್ನಡ ರಂಗಭೂಮಿ ಉತ್ಕರ್ಷಕ್ಕೆ ಅವರೇ ಕಾರಣ. ಹೀಗಾಗಿ, ಅವರ ವ್ಯಕ್ತಿತ್ವದ ಕುರಿತು ಗ್ರಂಥ ರಚನೆ ಅಥವಾ ಅವರ ಹೆಸರಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಬೇಕು. ಅದಕ್ಕೆ ನನ್ನಿಂದಾಗುವ ಸಹಾಯ ಮಾಡುತ್ತೇನೆ’ ಎಂದರು.