ಈ ಮಾರ್ಗವಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚನ್ನಗಿರಿ, ಹೊನ್ನಾಳಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ನಿತ್ಯವೂ ನೂರಾರು ಸಂಚರಿಸುತ್ತವೆ. ಬಸ್ಸಿನಲ್ಲಿ ಸಂಚರಿಸುವ ವೃದ್ಧರು, ಗರ್ಭಿಣಿಯರು, ಬಾಣಂತಿಯರು ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ನಿತ್ಯವೂ ಸಾವಿರಾರು ಲಾರಿ, ಟ್ರ್ಯಾಕ್ಟರ್, ಕಾರು, ಜೀಪು, ಶಾಲಾ ವಾಹನಗಳು ಸಂಚರಿಸುತ್ತವೆ. ದೊಡ್ಡ ವಾಹನಗಳು ಸಂಚರಿಸುತ್ತಿದಂತೆ ಸಾಕಷ್ಟು ದೂಳು ಹೊರಹೊಮ್ಮುತ್ತಿದೆ ಎನ್ನುತ್ತಾರೆ ವಕೀಲ ಯುವರಾಜು.