ಕ್ರಮಕ್ಕೆ ಒತ್ತಾಯ: ಕಾಟಿಪಳ್ಳದಿಂದ ನೇರವಾಗಿ ಆಕಾಶಭವನಕ್ಕೆ ಬಂದ ಗೃಹ ಸಚಿವರು ಬಶೀರ್ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರ ನೀಡಿರುವ ಪರಿಹಾರದ ಹೊರತಾಗಿ ಏನೂ ಬೇಡ ಎಂದ ಕುಟುಂಬದ ಸದಸ್ಯರು, ‘ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಿ’ ಎಂದು ಕೈಮುಗಿದು ಮನವಿ ಮಾಡಿದರು.