ಸಂಸದ ಜಿ.ಎಂ.ಸಿದ್ದೇಶ್ವರ ಶುಕ್ರವಾರ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು. ಫ್ಲಾಟ್ಫಾರಂನಲ್ಲಿದ್ದ ಆಸನಗಳು ಸಾಲದೆ ನೆಲದಲ್ಲಿ ಕುಳಿತವರು, ಮಲಗಿದವರನ್ನು ಕಂಡರು. ಇನ್ನಷ್ಟು ಆಸನ ವ್ಯವಸ್ಥೆ ಮಾಡಿ ಎಂದು ಸ್ಟೇಷನ್ ಮಾಸ್ಟರ್ಗೆ ಸೂಚಿಸಿದರು. ಕ್ಯಾಂಟೀನ್ನಲ್ಲಿ ತಿಂಡಿ, ಊಟಕ್ಕೆ ದುಬಾರಿ ದರ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ರುಚಿ ಇನ್ನಷ್ಟು ಸುಧಾರಿಸಬೇಕು. ದರ ಕಡಿಮೆ ಮಾಡ ಬೇಕು ಎಂದು ಕ್ಯಾಂಟೀನ್ ಮಾಲೀಕರಿಗೆ ಸೂಚಿಸಿದರು ಲಗೇಜ್ ರೂಂನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ಕಟ್ಟಡ ಶಿಥಿಲಗೊಂಡಿರುವುದಕ್ಕೆ ರೈಲ್ವೆ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.