’ದೇಶ ಕಟ್ಟವಲ್ಲಿ ಯುವ ಜನರ ಪಾತ್ರ’ ಕುರಿತು ಮಾತನಾಡಿದ ವಕೀಲೆ ಮಮತಾ ನಾಯ್ಕ, ‘ ರಾಜಕೀಯ ಸ್ಥಿತಿ ಕೆಟ್ಟು ಹೋಗಿರುವ ಈ ದೇಶದಲ್ಲಿ ನನ್ನಿಂದ ಏನು ಮಾಡಲು ಸಾಧ್ಯ ಎನ್ನುವ ತಾತ್ಸಾರವನ್ನು ಯುವಜನರು ತಳೆಯಬಾರದು. ಆತ್ಮ ವಿಶ್ವಾಸ, ಛಲ ಇದ್ದರೆ ಬಡತನ ಮುಂತಾದ ಕಷ್ಟವನ್ನು ಮೀರಿ ಸಾಧನೆ ಮಾಡಬಹುದು ಎನ್ನುವುದ ವಿವೇಕಾನಂದರು ತೋರಿಸಿದ್ದಾರೆ’ ಎಂದರು. ಪ್ರಾಭಾರಿ ಪ್ರಾಚಾರಯ ಡಾ. ವಿ.ಎಂ. ಪೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಆರ್.ಎ. ಹೆಗಡೆ, ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ನಾಯ್ಕ ವೇದಿಕೆಯಲ್ಲಿದ್ದರು. ವಕೀಲ ಮಧು ಹೆಗಡೆ ಸ್ವಾಗತಿಸಿದರು.